Latest News

ದುಗ್ಗಮ್ಮನಿಗೆ ಹರಕೆ ಸಲ್ಲಿಸಲು ಜನರ ನೂಕುನುಗ್ಗಲು ಹಳೆ ನಗರದ ಗಲ್ಲಿ ಗಲ್ಲಿಗಳಲ್ಲಿ ಬಾಡೂಟದ ಘಮ
25-Feb-2026:

ದಾ ನಗರವಾಣಿ ಸುದ್ದಿ ದಾವಣಗೆರೆ: ಬುಧವಾರ ನಡೆದ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯ ಅದ್ದೂರಿತನಕ್ಕೆ, ಭಕ್ತಿ ಪರಾಕಾಷ್ಠೆಗೆ, ವಿದ್ಯುಕ್ತ ಆಚರಣೆಗೆ ದಾವಣಗೆರೆ ಜನತೆ ಸಾಕ್ಷಿಯಾದರು. ಶಿವಾಜಿ ನಗರದಲ್ಲಿರುವ ನಗರದ ಅಧಿದೇವತೆ ಶ್ರೀ ದುಗ್ಗಮ್ಮನ ದೇವಸ್ಥಾನದ ಸುತ್ತ ಮುತ್ತ ಎಲ್ಲಿ ನೋಡಿದರು ಭಕ್ತರ ಉಧೋ... ಉಧೋ.. ದುಗ್ಗಮ್ಮ ಎನ್ನುವ ಭಕ್ತಿಯ ಧ್ವನಿಯೇ ಕೇಳಿಸುತ್ತಿತ್ತು. ದಾವಣಗೆರೆ ನಗರದ ನಾಲ್ಕು ದಿಕ್ಕುಗಳಿಂದ ಮಧ್ಯ ರಾತ್ರಿ 12 ಗಂಟೆಯಿAದಲೇ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬಂದಿತು. ಕುಟುಂಬ ಸದಸ್ಯರೆಲ್ಲ ಸೇರಿ ಹಣೆಯ ಮೇಲೆ ವಿಭೂತಿ, ಕುಂಕುಮ ಬಳಿದುಕೊಂಡು, ಕೈಯಲ್ಲಿ ಬೇವು ಹಿಡಿದು ಉಧೋ... ಉಧೋ... ದುಗ್ಗಮ್ಮನ ಎನ್ನುತ್ತ ಭಕ್ತಿಯಿಂದ ದೇವಸ್ಥಾನ ದಾರಿ ಹಿಡಿದರು. ಹರಕೆ ಹೊತ್ತವರು ದೇವಸ್ಥಾನ ಸುತ್ತ ಉರುಳು ಸೇವೆ, ದೀಡು ನಮಸ್ಕಾರ ಹಾಕಿ ದೇವಿಗೆ ತಮ್ಮ ಹರಕೆಯನ್ನು ತೀರಿಸಿದರು. ನಂತರ ದೇವಸ್ಥಾನ ಆವರಣದಲ್ಲಿ ಹರಕೆ ತೀರಿಸಿದ ಮಕ್ಕಳಿಗೆ ಪೋಷಕರು ಹೊಸ ಬಟ್ಟೆ ತೊಡಿಸಿ, ಆರತಿ ಎತ್ತಿ ಪೂಜೆಯನ್ನು ನೆರವೇರಿಸಿದರು. ರಾತ್ರಿಯಿಂದಲೇ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿತ್ತು. ಜೊತೆ ಹರಕೆ ಕುರಿಗಳನ್ನು ಕೂಡ ಕರೆದುಕೊಂಡು ಬಂದು ಕೊನೆಯ ಪ್ರದಕ್ಷಿಣೆಯನ್ನು ಹಾಕಿದರು. ವೀಲ್ ಚೇರ್‌ನಲ್ಲಿ ಬಂದು ದೇವಿಯ ದರ್ಶನ ಪಡೆದ ಭಕ್ತೆಯೊಬ್ಬರು ಗಮನ ಸೆಳೆದರು. ದೇವಸ್ಥಾನ ಹೋಗಿ ಬರುವ ಭಕ್ತರಿಗೆ ನಗರದೆಲ್ಲೆಡೆ ಪಾನಕ, ಮಜ್ಜಿಗೆ ವ್ಯವಸ್ಥೆಯಲ್ಲಿ ಸಂಘ-ಸAಸ್ಥೆಗಳಿAದ ಮಾಡಲಾಗಿತ್ತು. ಬುಧವಾರ ದೇವಿಗೆ ಪದ್ಧತಿ ಪ್ರಕಾರ ಪೂಜೆಯನ್ನು ನೆರವೇರಿಸಿ ಬೆಳಗ್ಗೆ 8 ಗಂಟೆಗೆ ಚರಗ ಚೆಲ್ಲಲಾಯಿತು. ಕೈಯಲ್ಲಿ ಚರಗದ ಪುಟ್ಟಿ ಹಿಡಿದು ಯುವಕರು ಉಘೆ... ಉಘೆ... ದುಗ್ಗಮ್ಮ ಎನ್ನುತ್ತ ಚರಗ ಚೆಲ್ಲಿದರು. ಚರಗ ತಮ್ಮ ಮನೆಯ ಬಳಿ ಬರುತ್ತಿದ್ದಂತೆ ಭಕ್ತರು ಚರಗದ ಕಾಳುಗಳನ್ನು ಪಡೆದು ತಮ್ಮ ತಮ್ಮ ಮನೆಯ ಮೇಲೆ ಎಸೆದರು. ಇದರಿಂದ ತಮ್ಮ ಮನೆಯ ಮೇಲೆ ದೇವಿಯ ಕೃಪೆ ಇರಲಿದೆ ಎನ್ನುವುದು ನಂಬಿಕೆ. ಉಡುಪು ರಹಿತ ಬೇವಿನ ಉಡುಗೆ ಧರಿಸಿ ಭಕ್ತಿಯನ್ನು ಸಮರ್ಪಿಸುವುದು ನಿಷೇಧವಿದ್ದರೂ ಕೂಡ ಅನೇಕ ಭಕ್ತರು ಬೇವಿನ ಉಡುಗೆಯನ್ನು ಮನೆಯಿಂದಲೇ ಧರಿಸಿ ಬರುತ್ತಿದ್ದರು. ಆದರೆ ದೇವಸ್ಥಾನ ಆವರಣದಲ್ಲಿ ತಡೆದ ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿಗಳು ಭಕ್ತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ನಂತರ ಉಡುಪು ಧರಿಸಿ ಅದರ ಮೇಲೆ ಬೇವು ಸುತ್ತಿಕೊಂಡು ಭಕ್ತಿಯನ್ನು ಸಮರ್ಪಿಸುವಂತೆ ಪ್ರೇರೇಪಿಸಿದರು. 30 ಸಾವಿರ ಕುರಿಗಳ ಬಲಿ: ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಿಂದ ಬುಧವಾರ ಸಂಪೂರ್ಣ ದಾವಣಗೆರೆ ಕಳೆಗಟ್ಟಿತ್ತು. ಪೂಜೆ ನೆರವೇರಿದ ನಂತರ ಹರಕೆ ಕುರಿಗಳನ್ನು ಬಲಿ ಕೊಡಲಾಯಿತು. ಅಂದಾಜಿನ ಪ್ರಕಾರ ಹತ್ತಿರ ಹತ್ತಿರ ಒಟ್ಟು 30 ಸಾವಿರ ಕುರಿಗಳನ್ನು ಬುಧವಾರ ಬಲಿ ಕೊಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಬೀಗರು, ಸ್ನೇಹಿತರು, ಬಂಧುಗಳ ಜೊತೆ ಕೂಡ ಭರ್ಜರಿ ಬಾಡೂಟವನ್ನು ದಾವಣಗೆರೆ ಜನ ಸವಿದಿದ್ದಾರೆ. ಇಂದು ಗುರುವಾರ ಕೂಡ ಕುರಿಗಳ ಬಲಿ ನಡೆಯಲಿದ್ದು, ದಾವಣಗೆರೆಯಲ್ಲಿ ಇನ್ನೂ ಮೂರು ದಿನ ಬಾಡೂಟದ ಗಮ್ಮತ್ತು ಇರಲಿದೆ. ಕುರಿ ಚರ್ಮ ಐನೂರು ರೂಗಳವರೆಗೆ ಮಾರಾಟವಾಗಿದೆ. ಬಿಗಿ ಭದ್ರತೆ, ಕೈತಪ್ಪಿದ ಮಕ್ಕಳು ಪೋಷಕರ ಮಡಿÀಲಿಗೆ: ಇಷ್ಟು ದೊಡ್ಡ ಜಾತ್ರೆ ನಡೆದರೂ ಮೊಬೈಲ್, ಆಭರಣಗಳು ಸೇರಿದಂತೆ ಯಾವುದೇ ರೀತಿ ಕಳವುಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಬ್ಬದ ನಿಮಿತ್ತ 1500 ಪೊಲೀಸರನ್ನು ನಿಯೋಜಿಸಲಾಗಿತ್ತು. 40 ಜನ ಮುಫ್ತಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ದೇವಸ್ಥಾನ ಆವರಣದಲ್ಲಿ ತೆರೆಯಲಾಗಿದ್ದ ಉಪ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ, ಅವರ ವಿವರಗಳನ್ನು ಪಡೆದು ಕಳುಹಿಸಲಾಗುತ್ತಿತ್ತು. ಕೈತಪ್ಪಿದ ಕೆಲವು ಮಕ್ಕಳನ್ನು ಪೊಲೀಸರ ಮೈಕ್‌ಗಳ ಮೂಲಕ ಕೂಗಿ ಹೇಳಿ ಪೋಷಕರ ಮಡಿಲು ಸೇರಿಸಿದರು. ಸಿಕ್ಕಸಿಕ್ಕವರ ಮೇಲೆ ಹಲ್ಲೆ: ದೇವಿಗೆ ಬಲಿ ಕೊಟ್ಟ ಎನ್ನಲಾದ ಪ್ರಾಣಿಯ ಕಾಲುಗಳನ್ನು ಹಿಡಿದು ಯುವಕನೊಬ್ಬ ಜನರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಸಮೀಪ ಘಟನೆ ನಡೆದಿದ್ದು, ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದು, ಜನರು ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದ್ದಾರೆ. ರಾತ್ರಿ ಇಡೀ ಕಾದು ಕುಳಿತ ಡಿಸಿ-ಎಸ್ಪಿ: ಜಾತ್ರೆ ನಿಮಿತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಾತ್ರೆಯ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗಿತ್ತು. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಶೇಖರ್, ಜಿಲ್ಲಾ ಪಂಚಾಯ್ತಿ ಸಿಇಓ ಗಿತ್ತೆ ಮಾದವ್ ವಿಠ್ಠಲ್ ರಾವ್ ದೇವಸ್ಥಾನ ಸ್ಥಳದಲ್ಲೇ ರಾತ್ರಿ ಇಡೀ ಕಾದು ಕುಳಿತು ಸೂಕ್ಷö್ಮವಾಗಿ ಆವಲೋಕಿಸಿದರು. ಕೋಣ ಬಲಿ ನಡೆಯಿತೆ?: ಶ್ರೀ ದುರ್ಗಾಂಬಿಕಾ ದೇವಿಗೆ ಬಿಡಲಾಗಿದ್ದ ಕೋಣವನ್ನು ಬಸವರಾಜ್ ಪೇಟೆಯ ಚೌಡಮ್ಮ ದೇವಸ್ಥಾನ ಹಿಂಭಾಗ ಬಲಿ ಕೊಡಲಾಗಿದೆ ಎನ್ನಲಾಗಿದೆ. ಆರೇಳು ಹೊಡೆತಗಳಿಗೆ ಕೋಣ ಬಲಿಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಹಬ್ಬ ಕಳೆ ಬಂದಿತು ಎನ್ನಲಾಗಿದೆ. ಇದನ್ನು ತಳ್ಳಿ ಹಾಕಿರುವ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಪ್ರಾಣಿ ಬಲಿಯಂಥ ಕೃತ್ಯಗಳು ನಡೆದಿಲ್ಲ. ಭಕ್ತರು ಅತ್ಯಂತ ಭಕ್ತಿಪರವಶರಾಗಿ, ಮೂಢನಂಬಿಕೆಗಳಿAದ ದೂರವಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಹಳೆ ನಗರದಲ್ಲಿ ಬಾಡೂಟದ ಘಮ: ದಾವಣಗೆರೆ ಹಳೆ ಭಾಗ ಬಾಡೂಟದಿಂದ ಘಮ ಘಮಿಸುತ್ತಿತ್ತು. ಹಬ್ಬದ ನಿಮಿತ್ತ ಪ್ರತಿ ಮನೆ ಮುಂಭಾಗ ಪೆಂಡಾಲ್ ಹಾಕಲಾಗಿತ್ತು. ಬುಧವಾರ ಸಂಜೆ 7 ಗಂಟೆಯ ನಂತರ ಬಾಡೂಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು.


ದಾವಣಗೆರೆ ದುಗ್ಗಮ್ಮ ಜಾತ್ರೆ ವೈಭವ
25-Feb-2026:

ದುಗ್ಗಮ್ಮನಿಗೆ ಹರಕೆ ಸಲ್ಲಿಸಲು ಜನರ ನೂಕುನುಗ್ಗಲು ಹಳೆ ನಗರದ ಗಲ್ಲಿ ಗಲ್ಲಿಗಳಲ್ಲಿ ಬಾಡೂಟದ ಘಮ ದಾ ನಗರವಾಣಿ ಸುದ್ದಿ ದಾವಣಗೆರೆ: ಬುಧವಾರ ನಡೆದ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯ ಅದ್ದೂರಿತನಕ್ಕೆ, ಭಕ್ತಿ ಪರಾಕಾಷ್ಠೆಗೆ, ವಿದ್ಯುಕ್ತ ಆಚರಣೆಗೆ ದಾವಣಗೆರೆ ಜನತೆ ಸಾಕ್ಷಿಯಾದರು. ಶಿವಾಜಿ ನಗರದಲ್ಲಿರುವ ನಗರದ ಅಧಿದೇವತೆ ಶ್ರೀ ದುಗ್ಗಮ್ಮನ ದೇವಸ್ಥಾನದ ಸುತ್ತ ಮುತ್ತ ಎಲ್ಲಿ ನೋಡಿದರು ಭಕ್ತರ ಉಧೋ... ಉಧೋ.. ದುಗ್ಗಮ್ಮ ಎನ್ನುವ ಭಕ್ತಿಯ ಧ್ವನಿಯೇ ಕೇಳಿಸುತ್ತಿತ್ತು. ದಾವಣಗೆರೆ ನಗರದ ನಾಲ್ಕು ದಿಕ್ಕುಗಳಿಂದ ಮಧ್ಯ ರಾತ್ರಿ 12 ಗಂಟೆಯಿAದಲೇ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬಂದಿತು. ಕುಟುಂಬ ಸದಸ್ಯರೆಲ್ಲ ಸೇರಿ ಹಣೆಯ ಮೇಲೆ ವಿಭೂತಿ, ಕುಂಕುಮ ಬಳಿದುಕೊಂಡು, ಕೈಯಲ್ಲಿ ಬೇವು ಹಿಡಿದು ಉಧೋ... ಉಧೋ... ದುಗ್ಗಮ್ಮನ ಎನ್ನುತ್ತ ಭಕ್ತಿಯಿಂದ ದೇವಸ್ಥಾನ ದಾರಿ ಹಿಡಿದರು. ಹರಕೆ ಹೊತ್ತವರು ದೇವಸ್ಥಾನ ಸುತ್ತ ಉರುಳು ಸೇವೆ, ದೀಡು ನಮಸ್ಕಾರ ಹಾಕಿ ದೇವಿಗೆ ತಮ್ಮ ಹರಕೆಯನ್ನು ತೀರಿಸಿದರು. ನಂತರ ದೇವಸ್ಥಾನ ಆವರಣದಲ್ಲಿ ಹರಕೆ ತೀರಿಸಿದ ಮಕ್ಕಳಿಗೆ ಪೋಷಕರು ಹೊಸ ಬಟ್ಟೆ ತೊಡಿಸಿ, ಆರತಿ ಎತ್ತಿ ಪೂಜೆಯನ್ನು ನೆರವೇರಿಸಿದರು. ರಾತ್ರಿಯಿಂದಲೇ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿತ್ತು. ಜೊತೆ ಹರಕೆ ಕುರಿಗಳನ್ನು ಕೂಡ ಕರೆದುಕೊಂಡು ಬಂದು ಕೊನೆಯ ಪ್ರದಕ್ಷಿಣೆಯನ್ನು ಹಾಕಿದರು. ವೀಲ್ ಚೇರ್‌ನಲ್ಲಿ ಬಂದು ದೇವಿಯ ದರ್ಶನ ಪಡೆದ ಭಕ್ತೆಯೊಬ್ಬರು ಗಮನ ಸೆಳೆದರು. ದೇವಸ್ಥಾನ ಹೋಗಿ ಬರುವ ಭಕ್ತರಿಗೆ ನಗರದೆಲ್ಲೆಡೆ ಪಾನಕ, ಮಜ್ಜಿಗೆ ವ್ಯವಸ್ಥೆಯಲ್ಲಿ ಸಂಘ-ಸAಸ್ಥೆಗಳಿAದ ಮಾಡಲಾಗಿತ್ತು. ಬುಧವಾರ ದೇವಿಗೆ ಪದ್ಧತಿ ಪ್ರಕಾರ ಪೂಜೆಯನ್ನು ನೆರವೇರಿಸಿ ಬೆಳಗ್ಗೆ 8 ಗಂಟೆಗೆ ಚರಗ ಚೆಲ್ಲಲಾಯಿತು. ಕೈಯಲ್ಲಿ ಚರಗದ ಪುಟ್ಟಿ ಹಿಡಿದು ಯುವಕರು ಉಘೆ... ಉಘೆ... ದುಗ್ಗಮ್ಮ ಎನ್ನುತ್ತ ಚರಗ ಚೆಲ್ಲಿದರು. ಚರಗ ತಮ್ಮ ಮನೆಯ ಬಳಿ ಬರುತ್ತಿದ್ದಂತೆ ಭಕ್ತರು ಚರಗದ ಕಾಳುಗಳನ್ನು ಪಡೆದು ತಮ್ಮ ತಮ್ಮ ಮನೆಯ ಮೇಲೆ ಎಸೆದರು. ಇದರಿಂದ ತಮ್ಮ ಮನೆಯ ಮೇಲೆ ದೇವಿಯ ಕೃಪೆ ಇರಲಿದೆ ಎನ್ನುವುದು ನಂಬಿಕೆ. ಉಡುಪು ರಹಿತ ಬೇವಿನ ಉಡುಗೆ ಧರಿಸಿ ಭಕ್ತಿಯನ್ನು ಸಮರ್ಪಿಸುವುದು ನಿಷೇಧವಿದ್ದರೂ ಕೂಡ ಅನೇಕ ಭಕ್ತರು ಬೇವಿನ ಉಡುಗೆಯನ್ನು ಮನೆಯಿಂದಲೇ ಧರಿಸಿ ಬರುತ್ತಿದ್ದರು. ಆದರೆ ದೇವಸ್ಥಾನ ಆವರಣದಲ್ಲಿ ತಡೆದ ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿಗಳು ಭಕ್ತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ನಂತರ ಉಡುಪು ಧರಿಸಿ ಅದರ ಮೇಲೆ ಬೇವು ಸುತ್ತಿಕೊಂಡು ಭಕ್ತಿಯನ್ನು ಸಮರ್ಪಿಸುವಂತೆ ಪ್ರೇರೇಪಿಸಿದರು. 30 ಸಾವಿರ ಕುರಿಗಳ ಬಲಿ: ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಿಂದ ಬುಧವಾರ ಸಂಪೂರ್ಣ ದಾವಣಗೆರೆ ಕಳೆಗಟ್ಟಿತ್ತು. ಪೂಜೆ ನೆರವೇರಿದ ನಂತರ ಹರಕೆ ಕುರಿಗಳನ್ನು ಬಲಿ ಕೊಡಲಾಯಿತು. ಅಂದಾಜಿನ ಪ್ರಕಾರ ಹತ್ತಿರ ಹತ್ತಿರ ಒಟ್ಟು 30 ಸಾವಿರ ಕುರಿಗಳನ್ನು ಬುಧವಾರ ಬಲಿ ಕೊಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಬೀಗರು, ಸ್ನೇಹಿತರು, ಬಂಧುಗಳ ಜೊತೆ ಕೂಡ ಭರ್ಜರಿ ಬಾಡೂಟವನ್ನು ದಾವಣಗೆರೆ ಜನ ಸವಿದಿದ್ದಾರೆ. ಇಂದು ಗುರುವಾರ ಕೂಡ ಕುರಿಗಳ ಬಲಿ ನಡೆಯಲಿದ್ದು, ದಾವಣಗೆರೆಯಲ್ಲಿ ಇನ್ನೂ ಮೂರು ದಿನ ಬಾಡೂಟದ ಗಮ್ಮತ್ತು ಇರಲಿದೆ. ಕುರಿ ಚರ್ಮ ಐನೂರು ರೂಗಳವರೆಗೆ ಮಾರಾಟವಾಗಿದೆ. ಬಿಗಿ ಭದ್ರತೆ, ಕೈತಪ್ಪಿದ ಮಕ್ಕಳು ಪೋಷಕರ ಮಡಿÀಲಿಗೆ: ಇಷ್ಟು ದೊಡ್ಡ ಜಾತ್ರೆ ನಡೆದರೂ ಮೊಬೈಲ್, ಆಭರಣಗಳು ಸೇರಿದಂತೆ ಯಾವುದೇ ರೀತಿ ಕಳವುಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಬ್ಬದ ನಿಮಿತ್ತ 1500 ಪೊಲೀಸರನ್ನು ನಿಯೋಜಿಸಲಾಗಿತ್ತು. 40 ಜನ ಮುಫ್ತಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ದೇವಸ್ಥಾನ ಆವರಣದಲ್ಲಿ ತೆರೆಯಲಾಗಿದ್ದ ಉಪ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ, ಅವರ ವಿವರಗಳನ್ನು ಪಡೆದು ಕಳುಹಿಸಲಾಗುತ್ತಿತ್ತು. ಕೈತಪ್ಪಿದ ಕೆಲವು ಮಕ್ಕಳನ್ನು ಪೊಲೀಸರ ಮೈಕ್‌ಗಳ ಮೂಲಕ ಕೂಗಿ ಹೇಳಿ ಪೋಷಕರ ಮಡಿಲು ಸೇರಿಸಿದರು. ಸಿಕ್ಕಸಿಕ್ಕವರ ಮೇಲೆ ಹಲ್ಲೆ: ದೇವಿಗೆ ಬಲಿ ಕೊಟ್ಟ ಎನ್ನಲಾದ ಪ್ರಾಣಿಯ ಕಾಲುಗಳನ್ನು ಹಿಡಿದು ಯುವಕನೊಬ್ಬ ಜನರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಸಮೀಪ ಘಟನೆ ನಡೆದಿದ್ದು, ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದು, ಜನರು ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದ್ದಾರೆ. ರಾತ್ರಿ ಇಡೀ ಕಾದು ಕುಳಿತ ಡಿಸಿ-ಎಸ್ಪಿ: ಜಾತ್ರೆ ನಿಮಿತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಾತ್ರೆಯ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗಿತ್ತು. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಶೇಖರ್, ಜಿಲ್ಲಾ ಪಂಚಾಯ್ತಿ ಸಿಇಓ ಗಿತ್ತೆ ಮಾದವ್ ವಿಠ್ಠಲ್ ರಾವ್ ದೇವಸ್ಥಾನ ಸ್ಥಳದಲ್ಲೇ ರಾತ್ರಿ ಇಡೀ ಕಾದು ಕುಳಿತು ಸೂಕ್ಷö್ಮವಾಗಿ ಆವಲೋಕಿಸಿದರು. ಕೋಣ ಬಲಿ ನಡೆಯಿತೆ?: ಶ್ರೀ ದುರ್ಗಾಂಬಿಕಾ ದೇವಿಗೆ ಬಿಡಲಾಗಿದ್ದ ಕೋಣವನ್ನು ಬಸವರಾಜ್ ಪೇಟೆಯ ಚೌಡಮ್ಮ ದೇವಸ್ಥಾನ ಹಿಂಭಾಗ ಬಲಿ ಕೊಡಲಾಗಿದೆ ಎನ್ನಲಾಗಿದೆ. ಆರೇಳು ಹೊಡೆತಗಳಿಗೆ ಕೋಣ ಬಲಿಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಹಬ್ಬ ಕಳೆ ಬಂದಿತು ಎನ್ನಲಾಗಿದೆ. ಇದನ್ನು ತಳ್ಳಿ ಹಾಕಿರುವ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಪ್ರಾಣಿ ಬಲಿಯಂಥ ಕೃತ್ಯಗಳು ನಡೆದಿಲ್ಲ. ಭಕ್ತರು ಅತ್ಯಂತ ಭಕ್ತಿಪರವಶರಾಗಿ, ಮೂಢನಂಬಿಕೆಗಳಿAದ ದೂರವಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಹಳೆ ನಗರದಲ್ಲಿ ಬಾಡೂಟದ ಘಮ: ದಾವಣಗೆರೆ ಹಳೆ ಭಾಗ ಬಾಡೂಟದಿಂದ ಘಮ ಘಮಿಸುತ್ತಿತ್ತು. ಹಬ್ಬದ ನಿಮಿತ್ತ ಪ್ರತಿ ಮನೆ ಮುಂಭಾಗ ಪೆಂಡಾಲ್ ಹಾಕಲಾಗಿತ್ತು. ಬುಧವಾರ ಸಂಜೆ 7 ಗಂಟೆಯ ನಂತರ ಬಾಡೂಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು.


ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ: ಹಂದರ ಕಂಬ ಪೂಜೆ ನೆರವೇರಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
23-Jan-2026:

ದಾವಣಗೆರೆ ನಗರ ದೇವತೆ ಶ್ರೀ‌ ದುರ್ಗಾಂಬಿಕಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ‌ ಮಲ್ಲಿಕಾರ್ಜುನ್ ಮತ್ತು ಅವರ ಮಗ ಸಮರ್ಥ್ ಹಾಲು ತುಪ್ಪು ಹಾಕಿ, ಆರತಿ ಬೆಳೆಗೆ ಹಂದರ ಕಂಬ ಪೂಜೆಯನ್ನು ನೆರವೇರಿಸಿದರು. ಈ ಮೂಲಕ ಫೆ.24 ಮತ್ತು 25ರಂದು ನಡೆಯುವ ದುರ್ಗಾಂಬಿಕಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಂತೆ ಆಗಿದ್ದು ಈ ಬಾರಿ ರಾಜ್ಯ ಮತ್ತು ಹೊರ‌‌ ರಾಜ್ಯದಿಂದ ಸುಮಾರು ಹತ್ತು ಲಕ್ಷ‌ ಜನ ಸೇರವ ನಿರೀಕ್ಷೆಯನ್ನು ದೇವಸ್ಥಾನ ಟ್ರಸ್ಟ್ ಹೊಂದಿದೆ.


ಉಕ್ಕಡಗಾತ್ರಿ ಸೇರಿ ವಿವಿಧೆಡೆ ಅಮಾವಾಸ್ಯೆ ಪೂಜೆ ಸಂಭ್ರಮ : ಅಪಾರ ಭಕ್ತರು ಭಾಗಿ
21-Jan-2026:

ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಅಮಾವಾಸ್ಯೆ ಪೂಜೆಗೆ ಭಾನುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು .


ವಿವೇಕಾನಂದರ ಆದರ್ಶಗಳಲ್ಲಿ ಬಾಳು ಬೆಳಗಿಸಿಕೊಳ್ಳಬೇಕು
20-Jan-2026:

ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳು ಸಾರ್ವಕಾಲಿಕ ಪ್ರಸ್ತುತ ಎಂದು ಚಿಂತಕ ಶಿವನಕೆರೆ ಬಸವಲಿಂಗಪ್ಪ ತಿಳಿಸಿದರು.




26-Feb-2026
Available after 11 AM

25-Feb-2026
Download

24-Feb-2026
Download

23-Feb-2026
Download

22-Feb-2026
Download

20-Feb-2026
Download

19-Feb-2026
Download

18-Feb-2026
Download

17-Feb-2026
Download

16-Feb-2026
Download

15-Feb-2026
Download

14-Feb-2026
Download

13-Feb-2026
Download

12-Feb-2026
Download

11-Feb-2026
Download

10-Feb-2026
Download

09-Feb-2026
Download

05-Feb-2026
Download

04-Feb-2026
Download

03-Feb-2026
Download

02-Feb-2026
Download

01-Feb-2026
Download

30-Jan-2026
Download

29-Jan-2026
Download

28-Jan-2026
Download

26-Jan-2026

23-Jan-2026
Download

22-Jan-2026
Download

21-Jan-2026
Download

16-Nov-2025
Download

About Nagaravani

ದಾವಣಗೆರೆ ನಗರವಾಣಿ ಪತ್ರಿಕೆ 50 ವರ್ಷಗಳನ್ನು ಪೂರೈಸುವ ಮೂಲಕ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಪತ್ರಿಕೆಯ ಸಂಸ್ಥಾಪಕರಾದ ದಿ. ಸಿ ಕೇಶವಮೂರ್ತಿ ಅವರು, 1973ರಲ್ಲಿ ಸ್ಥಳೀಯ ಜನ ಸಮಸ್ಯೆಗಳ ಕನ್ನಡಿಯಾಗಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪತ್ರಿಕೆಯನ್ನು ಪ್ರಾರಂಭಿಸಿದರು‌. ಈ ಮೂಲಕ ಜಿಲ್ಲೆಯ ಪ್ರಥಮ ಸ್ಥಳೀಯ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ದಾವಣಗೆರೆ ನಗರವಾಣಿ ಹೊಂದಿದೆ‌. ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ದಿನಪತ್ರಿಕೆಗೆ ನೀಡಲಾಗುವ 'ಆಂದೋಲನ' ಪ್ರಶಸ್ತಿಯನ್ನು ದಾವಣಗೆರೆ ನಗರವಾಣಿ 2017 ರಲ್ಲಿ ತನ್ನ ಮುಡಿಗೇರಿಸಿಕೊಂಡಿದೆ. 1992ರಲ್ಲಿ ದಾವಣಗೆರೆಯಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಶಾಂತಿ ಸ್ಥಾಪನೆಯಲ್ಲಿ ದಾವಣಗೆರೆ ನಗರವಾಣಿ ಪ್ರಮುಖ ಪಾತ್ರ ವಹಿಸಿತ್ತು. ನಗರವಾಣಿ ಹೆಸರಿನಲ್ಲಿ ಅನೇಕ ಪತ್ರಿಕೆಗಳು ಪ್ರಾರಂಭವಾದರೂ ಕೂಡ 51ನೇ ವರ್ಷದಲ್ಲಿ ವರ್ಷದಲ್ಲಿ ಮುನ್ನುಗ್ಗುತ್ತಿರುವ ದಾವಣಗೆರೆ ನಗರವಾಣಿ ಪತ್ರಿಕೆಯನ್ನು ಓದುಗರು ಈಗಲೂ ಜಿಲ್ಲೆಯ ನಂ.1 ಪತ್ರಿಕೆ ಸ್ಥಾನದಲ್ಲಿ ಇಟ್ಟಿದ್ದಾರೆ.

ಸಂಸ್ಥಾಪಕ ಸಂಪಾದಕರು: ಸಿ.ಕೇಶವಮೂರ್ತಿ
ಸಂಸ್ಥಾಪಕ ಸಂಪಾದಕರು
ಸಿ.ಕೇಶವಮೂರ್ತಿ
ಪ್ರಧಾನ ಸಂಪಾದಕರು: ಡಾ|| ಸಿ.ಕೆ.ಜಯಂತ್
ಪ್ರಧಾನ ಸಂಪಾದಕರು
ಡಾ|| ಸಿ.ಕೆ.ಜಯಂತ್
ಸಹ ಸಂಪಾದಕರು: ಬಿ.ಎನ್.ಮಲ್ಲೇಶ್
ಸಹ ಸಂಪಾದಕರು
ಬಿ.ಎನ್.ಮಲ್ಲೇಶ್

Advertising Pricing

E PAPER Top 8 Cm x 5 Cm 2,000 Rs
E PAPER Bottom 3 Cm x 10 Cm 1,500 Rs
E PAPER Side 2 Cm x 5 Cm 500 Rs

E PAPER ADVERTISEMENT TARIFF Per Month

E PAPER Top 8 Cm x 5 Cm 30,000 Rs
E PAPER Bottom 3 Cm x 10 Cm 22,500 Rs
E PAPER Side 2 Cm x 5 Cm 7,500 Rs

* Note: 5% GST Excluding

Contact Us

B.N.Mallesh
Editor
9844060736
Email us dngrvani@gmail.com
For Advertising 08192-254186
8310645233
Suresh Kakkaragolla
WhatsUp

Follow Us