02-Mar-2026: ನಾಗರಾಜ ಹಾವನೂರ
ದಾ ನಗರವಾಣಿ ಸುದ್ದಿ
ರಾಣೇಬೆನ್ನೂರು,ಮಾ.02: ದೇಶಾದ್ಯಂತ ಎಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಇದಕ್ಕೆ ಸಾಕ್ಷಿಯಾಗಿ ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬದ ಮುನ್ನಾ ದಿನ ಜೀವಂತ ರತಿಕಾಮರ ಪ್ರತಿಷ್ಠಾಪನೆ ರಂಗು ತರುತ್ತದೆ.
ಎಂಥವರನ್ನಾದರು ನಗಿಸುವ ಸಾಮರ್ಥ್ಯ ನಿಮ್ಮಲ್ಲಿದೆಯೇ? ನಗಿಸುವುದರಲ್ಲಿ ನೀವು ಪ್ರವೀಣರೇ? ನಗಿಸುವುದರಲ್ಲಿಯೇ ಪಾಂಡಿತ್ಯ
ವನ್ನು ಪಡೆದಿದ್ದೀರಾ? ಹಾಗಾದರೆ ತಡವೇಕೆ ಬನ್ನಿ ಹೋಳಿ ಹಬ್ಬದ ನಿಮಿತ್ತ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಎದುರಿನ ವೇದಿಕೆಯಲ್ಲಿ, ಮಾರ್ಚ 03 ರಂದು (ಮಂಗಳವಾರ) ರಾತ್ರಿ 7 ಗಂಟೆಯಿAದ ಮಧ್ಯರಾತ್ರಿ 1 ರವರೆಗೆ ಕುಳಿತುಕೊಳ್ಳುವ ಕಾಮ-ರತಿ ವೇಷಧಾರಿಗಳನ್ನು ನಗಿಸಿ ಲಕ್ಷ-ಲಕ್ಷ ರೂ. ನಗದು ಬಹುಮಾನ ಗೆಲ್ಲಿರೆಂದು ಕಾರ್ಯ
ಕ್ರಮದ ಸಂಘಟಕರು ಹಾಗೂ ಸಮಿತಿಯವರು ಬಹಿರಂಗವಾಗಿ ಸವಾಲು ಎಸೆದಿದ್ದಾರೆ.
ಏನಿದು ವಿಶೇಷ:- ಕಳೆದ 67 ವರ್ಷಗಳ ಹಿಂದೆ 1958-59ನೇ ಇಸ್ವಿಯಲ್ಲಿ ನಗರದ ದೊಡ್ಡಪೇಟೆಯ ಪ್ರಮುಖರಾಗಿದ್ದ ವಿರುಪಾಕ್ಷಪ್ಪ ರೊಡ್ಡನವರ, ಬಸವರಾಜಪ್ಪ ಹರಿಹರ, ದೇವೆಂದ್ರಪ್ಪ ಮೂಡಬಾಗಿಲ, ಈರಣ್ಣ ಜಂಬಗಿ ಸೇರಿದಂತೆ ಹಲವಾರು ಪ್ರಮುಖರೆಲ್ಲಾ ಸೇರಿ ಹೋಳಿ ಹಬ್ಬದ ಆಚರಣೆ ನಿಮಿತ್ತ ಜೀವಂತ ರತಿಕಾಮರ ಪ್ರತಿಷ್ಠಾಪನೆಗಾಗಿ ಊರಲ್ಲಿ ಚಂದಾ ರೂಪದಲ್ಲಿ ಹಣ ಸಂಗ್ರಹಿಸಿದರು. ಹಣ ಸಂಗ್ರಹಿಸಿದ ಪ್ರಮುಖರು ಹಬ್ಬದ ನಿಮಿತ್ತ ಏನಾದರೊಂದು ಹೊಸ ಕಾರ್ಯಕ್ರಮ ಮಾಡೋಣವೆಂದು ಚರ್ಚಿಸುತ್ತಿದ್ದ ಸಮಯದಲ್ಲಿ ಜೀವಂತ ರತಿಕಾಮರನ್ನು ಕುಳ್ಳಿರಿಸಿ ಸಾರ್ವಜನಿಕರಿಗೆ ಹಬ್ಬದ ಕೊಡುಗೆಯಾಗಿ ಮನರಂಜನೆಯನ್ನು ನೀಡೋಣವೆಂದು ನಿರ್ಧಾರ ತೆಗೆದು
ಕೊಂಡರು. ನಿರ್ಧಾರದ ಪ್ರಕಾರ ಪುರುಷರೇ ರತಿಕಾಮರ ಪಾತ್ರಧಾರಿಗಳಾಗಿ ಕುಳಿತು
ಕೊಳ್ಳಲು ಹಾಗೂ ರತಿಕಾಮರನ್ನು ನಗಿಸಿದರೆ ಬಹುಮಾನ ನೀಡುವುದಾಗಿ 67 ವರ್ಷಗಳ ಹಿಂದೆ ನಮ್ಮ ಹಿರಿಯರು ನಿರ್ಧರಿಸಿ ಪ್ರಾರಂಭಿ
ಸಿರುವ ಜೀವಂತ ರತಿಕಾಮರ ಪ್ರತಿಷ್ಠಾಪ
ನೆಯ ಕಾರ್ಯಕ್ರಮವನ್ನು ನಾವು ಮುಂದುವರೆಸಿ
ಕೊAಡು ಬಂದಿದ್ದು ಮಾರ್ಚ್ 03 ರಂದು ಮಂಗಳವಾರ ರಾತ್ರಿ ಪ್ರತಿಷ್ಠಾಪನೆಗೊಳ್ಳುವ ಜೀವಂತ ರತಿಕಾಮರನ್ನು ನಗಿಸಿದವರಿಗೆ 13 ಲಕ್ಷ ರೂ. ಗಳ ಬಹುಮಾನವನ್ನು ನೀಡಲು ನಿರ್ಧರಿಸಿದ್ದೇವೆಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಯಾರೀ ರತಿಕಾಮರು: ಕಳೆದ 67 ವರ್ಷಗಳಿಂದ ನಡೆದು ಬಂದಿರುವ ಈ ಆಚರಣೆಯಲ್ಲಿ ರತಿಕಾಮರ ವೇಷದಲ್ಲಿ ಒಂದೇ ಜೋಡಿ ಕುಳಿತಿಲ್ಲ, 1958ರ ಪ್ರಾರಂಭದಲ್ಲಿ ವಿರುಪಾಕ್ಷಪ್ಪ ರೊಡ್ಡನವರ, ಲಕ್ಷö್ಮಣ ತಳಿಕೊಪ್ಪಿ ರತಿಕಾಮರ ವೇಷಧಾರಿಗಳಾಗಿ 3 ವರ್ಷಗಳ ಕಾಲ ಮುಂದುವರೆದರೆ, ಮುಂದೆ ಕೊಟ್ರಪ್ಪ ಕಸವಾಳ (ಕಾಮ) ಸುಭಾಸ ಗಲಜೇರಿ(ರತಿ) ಯಲ್ಲಪ್ಪ ರ್ಯಾವಾಳದ(ಕಾಮ), ವಾಗೀಶ ಜಂಬಗಿ, ಶಂಕರೆಪ್ಪ ಮಜ್ಜಗಿ ಸೇರಿದಂತೆ ಮುಂತಾದವರು ಕಾಮರತಿ ವೇಷದಲ್ಲಿ ಮೆರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳೆದ 27 ವರ್ಷಗಳಿಂದ ಗದಿಗೇಶ ಸಣ್ಣತಮ್ಮಪ್ಪ ರೊಡ್ಡನವರ ಕಾಮನ ವೇಷಧಾರಿಯಾಗಿ ಹಾಗೂ 32 ವರ್ಷಗಳಿಂದ ಕುಮಾರ ಹಡಪದ ರತಿ ವೇಷಧಾರಿಯಾಗಿ ಪ್ರದರ್ಶನ ನೀಡುತ್ತಾ ಕಾರ್ಯಕ್ರಮಕ್ಕೆ ರಂಗು ನೀಡುತ್ತಾ ಬಂದಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಇವರಿಬ್ಬರೂ ರತಿಕಾಮರ ಪಾತ್ರಧಾರಿಗಳಾಗಿ ಕುಳಿತುಕೊಳ್ಳುವರು.
ಬಹುಮಾನದ ಮೊತ್ತ ದುಪ್ಪಟ್ಟು: ನಗಿಸಿದ
ವರಿಗೆ ವಿವಿಧ ಸಂಘ ಸಂಸ್ಥೆಯವರು ಲಕ್ಷ-ಲಕ್ಷ ಬಹುಮಾನ ಘೋಷಣೆ ಮಾಡಿದರೂ ಇದುವರೆಗೂ ಯಾರೂ ಬಹುಮಾನ ಗೆದ್ದಿಲ್ಲಾ. ಈ ಬಾರಿ ಬಹುಮಾನದ ಮೊತ್ತ 13 ಲಕ್ಷ ದಾಟಿದೆ. ಪ್ರಮುಖರಾದ ಅಜ್ಜಪ್ಪ ಜಂಬಗಿ 3 ಲಕ್ಷ, ಎ.ಬಿ. ಪಾಟೀಲ, ಅನೀಲ ಸಿದ್ದಾಳಿ, ಕೊಟ್ರೇಶ್ ಕೆಂಚಪ್ಪನವರ, ಬಸವರಾಜ ರೊಡ್ಡ
ನವರ, ಸಿದ್ದು ಚಿಕ್ಕಬಿದರಿ ತಲಾ 1 ಲಕ್ಷ, ಯುವ
ರಾಜ ಬಾರಾಟಕ್ಕಿ, ಕುಮಾರ ಏಳೆಹೊಳೆ, ಪ್ರಭುಸ್ವಾಮಿ ಕರ್ಜಗಿಮಠ, ಶಿವರಾಜ ಬೇತೂರ, ಗಿರೀಶ ಅಡಕಿ, ಬಿ.ಎಂ.ತಾವರ
ಗುAದಿ, ಶಿವಕುಮಾರ ಹರ್ಕನಾಳ, ಪ್ರಶಾಂತ ಹಿತ್ತಲಮನಿ ತಲಾ 50 ಸಾವಿರ ರೂ. ಹಾಗೂ ಇತರರು ಒಂದು ಲಕ್ಷ ರೂ. ಸೇರಿ ಒಟ್ಟು 13 ಲಕ್ಷ ರೂ. ಬಹುಮಾನದ ಮೊತ್ತವಾಗಿದೆ.
ನಗಿಸಲು ಹೋಗಿ ನಗೆಪಾಟಲಿ
ಗೀಡಾಗಿದ್ದಾರೆ: ಹೋಳಿ ಹಬ್ಬದ ನಿಮಿತ್ತ ಆಚರಣೆಗೆ ಹೆಸರಾಗಿರುವ 67 ವರ್ಷಗಳ ಇತಿಹಾಸವನ್ನು ಹೊಂದಿರುವ ಜೀವಂತ ರತಿ ಕಾಮರ ಪ್ರದರ್ಶನವನ್ನು ರಾಜಧಾನಿ ಬೆಂಗಳೂರಿನ ಜನರಿಗೆ ಪ್ರದರ್ಶನದ ಮೂಲಕ ಪರಿಚಯಿಸುವುದಕ್ಕಾಗಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ದಿ ಸಂಘ ಬೆಂಗಳೂರಿನ ಅರಮನೆ ಮೈದಾನದಲ್ಲಿ 2013ನೇ ಆಗಸ್ಟ್ಟ್ 10 ರಂದು ಏರ್ಪಡಿಸಿದ್ದ ಉತ್ತರ ಕರ್ನಾಟಕ ಉತ್ಸವದಲ್ಲಿ ಕಾಮನ ವೇಷದಲ್ಲಿ ಗದಿಗೆಪ್ಪ ಸಣ್ಣತಮ್ಮಪ್ಪ ರೊಡ್ಡನವರ ರತಿ ವೇಷದಲ್ಲಿ ಕುಮಾರ ಹಡಪದ ಜೀವಂತ ರತಿಕಾಮರಾಗಿ ಕುಳಿತು ಪ್ರದರ್ಶನ ನೀಡಿದ ಸಮಯದಲ್ಲಿ ಇವರನ್ನು ನಗಿಸಲು ಹೋದವರಲ್ಲಿ ಪ್ರಮುಖರೆನಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ದಿಡಗೂರು ಸೇರಿದಂತೆ ಸಾವಿರಾರು ಜನರು ನಗಿಸಲು ಬಂದು ನಗೆಪಾಟಲಿಗೀಡಾಗಿದ್ದಾರೆಂದು ಕಾರ್ಯಕ್ರಮ ಸಂಘಟಿಕರು ಹೆಮ್ಮೆಯಿಂದ ಹೇಳುತ್ತಾರೆ. |